ನಮ್ಮ ಪ್ರತಿದಿನದ ಮುಂಜಾನೆಯನ್ನು ನಾವು ಹೇಗೆ ಆರಂಭಿಸುತ್ತೇವೆ ( wake up early morning in kannada ) ಎಂಬುದರ ಮೇಲೆ ನಮ್ಮ ಇಡೀ ದಿನದ ಯಶಸ್ಸು ಅವಲಂಬಿತವಾಗಿರುತ್ತದೆ. ಪ್ರಸ್ತುತ ಜೀವನಶೈಲಿಯಲ್ಲಿ ಮನಸ್ಸಿನ ದುಮ್ಮಾನಗಳು, ಒತ್ತಡಗಳು ಮತ್ತು ಟೆನ್ಶನ್ಗಳಿಂದ ನಾವು ಹೊರಬರಲು, ಬೆಳಗಿನ ದಿನಚರಿ ಅತ್ಯಗತ್ಯ. ಈ ಲೇಖನದಲ್ಲಿ ಆಯುರ್ವೇದ ಮತ್ತು ಯೋಗ ತತ್ವಗಳ ಆಧಾರದ ಮೇಲೆ ವೈದ್ಯಶ್ರೀ ಚನ್ನಬಸವರಣ ಅವರು ವಿವರಿಸಿದಂತೆ ಪ್ರತಿದಿನದ ಆರಂಭವನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ. ಈ ಸರಳ ನಿಯಮಗಳನ್ನು ಪಾಲಿಸುವುದರಿಂದ, ನಾವು ಇಡೀ ದಿನ ಉಲ್ಲಾಸ ಮತ್ತು ಉತ್ಸಾಹದಿಂದ ಇರಬಹುದು, ನಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ಆಯಸ್ಸು ಹೆಚ್ಚುತ್ತದೆ.
ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ..!

ಬೆಳಿಗ್ಗೆ ಎದ್ ತಕ್ಷಣ ಏನು ಮಾಡಬೇಕು..?
ಬೆಳಗ್ಗೆ ಎದ್ದ ತಕ್ಷಣ, ಮೈ ಮುರಿದು ಏಳುವುದು ಅತ್ಯಂತ ಮುಖ್ಯ. ಪ್ರಾಣಿಗಳು ಮಲಗಿ ಎದ್ದೇಳುವಾಗ ಚೆನ್ನಾಗಿ ಮೈ ಮುರಿಯುತ್ತವೆ, ಅದೇ ರೀತಿ ನಾವು ಕೂಡ ಮೈ ಮುರಿದು ಎದ್ದರೆ, ದೇಹದ ಆಲಸ್ಯ ದೂರವಾಗುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ( wake up early morning in kannada ) ಎದ್ದು ಕೂತ ನಂತರ, ಎರಡೂ ಕೈಗಳನ್ನು ರಬಸವಾಗಿ ಉಜ್ಜಿ, ಬಿಸಿ ಹಸ್ತಗಳನ್ನು ಕಣ್ಣುಗಳಿಗೆ ಮತ್ತು ಮುಖಕ್ಕೆ ಸ್ಪರ್ಶಿಸಬೇಕು. ಇದರಿಂದ ಮೆದುಳು, ಹೃದಯ, ಶ್ವಾಸಕೋಶ, ಕಿಡ್ನಿ ಮತ್ತು ಲಿವರ್ಗಳು ಚುರುಕಾಗುತ್ತವೆ. ನಂತರ, ನಾವು ನಂಬಿರುವ ಗುರುಗಳು ಅಥವಾ ದೈವದ ಭಾವಚಿತ್ರಗಳನ್ನು ನೋಡಿ, ಕೃತಜ್ಞತೆಯಿಂದ ನಗುನಗುತ್ತಾ ದಿನದ ಕೆಲಸಗಳನ್ನು ಆರಂಭಿಸಬೇಕು. ಪ್ರತಿದಿನ ನಮಗೆ ಬದುಕಲು ಮತ್ತೊಂದು ಅವಕಾಶ ಸಿಕ್ಕಿದೆ ಎಂಬ ಸಂತೋಷದಿಂದ ನಗುವುದು ಉತ್ತಮ ಅಭ್ಯಾಸ.
ಮಲಬದ್ಧತೆ ನಿವಾರಣೆಗೆ ಪರಿಹಾರಗಳು
ಬೆಳಗ್ಗೆ ಎದ್ದ ತಕ್ಷಣ ಬಾಯಿ ಮತ್ತು ಹಲ್ಲುಗಳನ್ನು ಚೆನ್ನಾಗಿ ತೊಳೆಯಬೇಕು. ಆನಂತರ, ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಮಲವಿಸರ್ಜನೆಗೆ ಸಹಕಾರಿ. ನೀರು ಕುಡಿದ ನಂತರ ಶೌಚಾಲಯಕ್ಕೆ ಹೋಗಬೇಕು. ಒಂದು ವೇಳೆ, ಮಲಬದ್ಧತೆಯ ಸಮಸ್ಯೆ ಇದ್ದರೆ, ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸೂರ್ಯ ನಮಸ್ಕಾರ ಮಾಡಬೇಕು. ಈ ರೀತಿ ಮಾಡುವುದರಿಂದ ಮಲವಿಸರ್ಜನೆಯು ಸಹಜವಾಗುತ್ತದೆ. ಯಾವ ಕಾಲದಲ್ಲಿ ಯಾವ ಎಣ್ಣೆಯನ್ನು ಬಳಸಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ:
1. ಚೆನ್ನಾಗಿ ಮೈ ಮುರಿದು ಎದ್ದು ಕುಳಿತುಕೊಳ್ಳಿ: ( wake up early morning in kannada )
- ನಾಯಿ ಎದ್ದಾಗ ಹೇಗೆ ಮೈ ಉಜ್ಜಿಕೊಳ್ಳುತ್ತದೆಯೋ ಹಾಗೆ ನಾವೂ ಮೈ ತೀವ್ರವಾಗಿ ಮುರಿದು ಚಲನೆಗೊಳಿಸಬೇಕು.
- ಇದು ದೇಹದ ನಿದ್ದೆಯ ಮಟ್ಟದಿಂದ ಚುರುಕುತನದ ಮಟ್ಟಕ್ಕೆ ತರಲು ಸಹಾಯಕ.

2. ಹಸ್ತ ಮಸಾಜ್ (Hand Massage):
- ಕೈಗಳನ್ನು ಚೆನ್ನಾಗಿ ಉಜ್ಜಿ, ಬಿಸಿ ಉಂಟುಮಾಡಿ, ದೇಹದ ವಿವಿಧ ಭಾಗಗಳಿಗೆ ಸ್ಪರ್ಶಿಸಿ.
- ಇದರ ಪರಿಣಾಮವಾಗಿ ಮೆದುಳು, ಹೃದಯ, ಶ್ವಾಸಕೋಶ, ಕಿಡ್ನಿ, ಮತ್ತು ಲಿವರ್ಗಳು ಚುರುಕಾಗುತ್ತವೆ.
3. ದೈವ ಸ್ಮರಣೆ:
- ನಿಮ್ಮ ಗುರು ಅಥವಾ ದೈವದ ಭಾವಚಿತ್ರವನ್ನು ನೋಡಿ ಪ್ರಾರ್ಥನೆ ಮಾಡಿ.
- ಹೃದಯಪೂರ್ವಕ ಧನ್ಯವಾದ ನೀಡಿ ಮತ್ತು ದಿನವನ್ನು ಸಂತೋಷದಿಂದ ಪ್ರಾರಂಭಿಸಿ.
4. ಬಾಯಿ ತೊಳೆಯುವುದು:
- ಹಲ್ಲು ಬ್ರಷ್ ಮಾಡಿ, ಬಾಯಿ ತೊಳೆಯಿರಿ.
5. ಬೆಚ್ಚಗಿನ ನೀರು ಕುಡಿಯಿರಿ: ( wake up early morning in kannada )
- ಒಂದು ಗ್ಲಾಸ್ ಉಗುರು ಬೆಚ್ಚಿನ ನೀರು ಕುಡಿಯುವುದು ಉತ್ತಮ.
6. ಟಾಯ್ಲೆಟ್ ಗೆ ಹೋಗಿ (Motion):
- ಬೇಗನೆ ಹಸಿವಾಗದೆ ಹಾಯಾಗಿ ಶೌಚಕ್ರಮ ಪೂರೈಸಬೇಕು.
- ಮೋಷನ್ ಆಗದಿದ್ದರೆ ಎಣ್ಣೆ ಮಸಾಜ್ ಮಾಡಿ:
- ಚಳಿಗಾಲ: ಎಳ್ಳೆಣ್ಣೆ
- ಬೇಸಿಗೆ: ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ
- ಮಳೆಗಾಲ: ಸಾಸಿವೆ ಎಣ್ಣೆ
☀️ ಸೂರ್ಯನಮಸ್ಕಾರ: ( wake up early morning in kannada )
- 20–25 ಸೂರ್ಯನಮಸ್ಕಾರ ಮಾಡುವುದು ಉತ್ತಮ.
- ಇದರ ವಿಡಿಯೋ ಲಿಂಕ್ ಡಿಸ್ಕ್ರಿಪ್ಷನ್ನಲ್ಲಿ ಅಥವಾ “ವೈದ್ಯಶ್ರೀ ಚನ್ನಬಸವಣ್ಣ ಸೂರ್ಯನಮಸ್ಕಾರ” ಎಂದು YouTube ನಲ್ಲಿ ಹುಡುಕಬಹುದು.

🧘♂️ ಪ್ರಾಣಾಯಾಮ ಅಭ್ಯಾಸ:
1. ಕಪಾಲಭಾತಿ (Kapalabhati):
- ಕಪಾಲಭಾತಿ: ಅಪಾನ, ಪ್ರಾಣ ಮತ್ತು ಹೃದಯ ಮುದ್ರೆಗಳಲ್ಲಿ ತಲಾ ಐದು ನಿಮಿಷ ಕಪಾಲಭಾತಿ ಅಭ್ಯಾಸ ಮಾಡಬೇಕು. ಇದು ದೇಹದಲ್ಲಿರುವ ಕಲ್ಮಶಗಳನ್ನು ಶುದ್ಧೀಕರಿಸುತ್ತದೆ, ಶ್ವಾಸಕೋಶದ ಬ್ಲಾಕೇಜ್ಗಳನ್ನು ನಿವಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕಪಾಲಭಾತಿ ಎಂದರೆ ‘ಸ್ಕಲ್ ಶೈನ್ ಬ್ರೀದಿಂಗ್’. ಇದು ಮೆದುಳು ಮತ್ತು ಇಡೀ ದೇಹಕ್ಕೆ ಹೊಳಪನ್ನು ನೀಡುತ್ತದೆ, ಬಿಪಿ, ಶುಗರ್, ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ನಂತಹ ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
2. ಅನುಲೋಮ ವಿಲೋಮ (Alternate Nostril Breathing):
- ಅನುಲೋಮ-ವಿಲೋಮ: ಕಪಾಲಭಾತಿಯ ನಂತರ 15 ನಿಮಿಷಗಳ ಕಾಲ ಅನುಲೋಮ-ವಿಲೋಮ ಪ್ರಾಣಾಯಾಮ ಮಾಡಬೇಕು. ಇದು ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ.
3. ಉಜ್ಜಾಯಿ ಪ್ರಾಣಾಯಾಮ:
- ಉಜ್ಜಾಯಿ ಪ್ರಾಣಾಯಾಮ: ಇದು ಗಂಟಲಿನ ಮೂಲಕ ಶಬ್ದ ಮಾಡುತ್ತಾ ಉಸಿರನ್ನು ತೆಗೆದುಕೊಳ್ಳುವ ಪ್ರಾಣಾಯಾಮ. ಉಸಿರನ್ನು ಹಿಡಿದಿಟ್ಟುಕೊಂಡು ನಂತರ ಎಡಭಾಗದಿಂದ ಬಿಡಬೇಕು. ಇದನ್ನು ಸುಮಾರು ಐದು ನಿಮಿಷಗಳ ಕಾಲ ಅಭ್ಯಾಸ ಮಾಡಬಹುದು.
4. ಶೀತಲಿ / ಶೀತಕಾರಿ ಪ್ರಾಣಾಯಾಮ: ( wake up early morning in kannada )
- ಶೀತಲಿ ಮತ್ತು ಶೀತಕಾರಿ: ಈ ಪ್ರಾಣಾಯಾಮಗಳು ದೇಹವನ್ನು ತಂಪುಗೊಳಿಸಲು ಸಹಾಯ ಮಾಡುತ್ತವೆ. ಶೀತಲಿ ಪ್ರಾಣಾಯಾಮದಲ್ಲಿ ನಾಲಿಗೆಯನ್ನು ರೋಲ್ ಮಾಡಿ ಉಸಿರನ್ನು ತೆಗೆದುಕೊಳ್ಳಬೇಕು. ಶೀತಕಾರಿ ಪ್ರಾಣಾಯಾಮದಲ್ಲಿ ನಾಲಿಗೆಯನ್ನು ಕಂಠರ ಕೂಪಕ್ಕೆ ಸ್ಪರ್ಶಿಸಿ ಉಸಿರು ತೆಗೆದುಕೊಳ್ಳಬೇಕು. ಆದರೆ, ಶೀತದ ಅಲರ್ಜಿ ಇರುವವರು ಇದನ್ನು ಮಾಡಬಾರದು.
5. ಬ್ರಾಮರಿ (Bhramari)
- ಭ್ರಾಮರಿ ಪ್ರಾಣಾಯಾಮ: ಕೊನೆಯದಾಗಿ, ಐದರಿಂದ ಹತ್ತು ನಿಮಿಷಗಳ ಕಾಲ ಭ್ರಾಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ಮನಸ್ಸನ್ನು ಶಾಂತಗೊಳಿಸಿ, ಪ್ರಸನ್ನವಾಗಿಸುತ್ತದೆ. ಮನಸ್ಸಿನ ದುಗುಡ, ದುಮ್ಮಾನಗಳು ಮತ್ತು ಒತ್ತಡಗಳನ್ನು ದೂರ ಮಾಡುತ್ತದೆ. ಇದು ಡಿಪ್ರೆಷನ್ ಮತ್ತು ಆತಂಕದಿಂದ ಮುಕ್ತಿಯನ್ನು ನೀಡುತ್ತದೆ.
🙏 ಆತ್ಮ ಮತ್ತು ದೇಹದ ನಡುವಿನ ಸೇತುವೆ – ಮನಸ್ಸು:
- ಮನಸ್ಸು ಯೋಗಮನವಾಗಬೇಕು.
- ಭೋಗಮನ ಅಥವಾ ರೋಗಮನವಾಗಬಾರದು.
- ಪ್ರಾಣಾಯಾಮದಿಂದ ಮನಸ್ಸು ಶುದ್ಧವಾಗುತ್ತದೆ.
✅ ಲಾಭಗಳು:
- ಉತ್ಸಾಹ, ಸಂತೋಷ, ಆರೋಗ್ಯ, ಆಧ್ಯಾತ್ಮ
- ಪ್ರಾಣವೇ ಔಷಧಿಯಾಗುತ್ತದೆ.
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
Discover more from
Subscribe to get the latest posts sent to your email.
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ